Tuesday, April 28, 2009

ದಾವಣಗೆರೆ / ಕಣ ಚಿತ್ರಣ

Posted by Da.Ko.Halli Chandrashekara


ಚಿತ್ರದುರ್ಗ / ಕಣ ಚಿತ್ರಣ

Posted by Da.Ko.Halli Chandrashekara


Monday, April 27, 2009

ಚಿತ್ರದುರ್ಗ / ಪರಿಷ್ಕೃತ ಮತದಾನ ವಿವರ

Posted by Da.Ko.Halli Chandrashekara


Friday, April 24, 2009

ಚಿತ್ರದುರ್ಗ / ಮತಭಾರತ

Posted by Da.Ko.Halli Chandrashekara

ಬಹಿಷ್ಕಾರದ ನಡುವೆ ಶಾಂತಿಯುತ ಮತದಾನ
ಚಿತ್ರದುರ್ಗ : ಪರಿಶಿಷ್ಟ ಜಾತಿ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಶೇ.೪೮.೦೯ ರಷ್ಟು ಮತದಾನವಾಗಿದೆ. ಕೆಲ ಕಡೆ ಮತದಾನ ಬಹಿಷ್ಕಾರ, ಸಣ್ಣಪುಟ್ಟ ಗೊಂದಲ ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿತ್ತು.
ಪಾವಗಡದಲ್ಲಿ ಅತಿ ಹೆಚ್ಚು ಶೇ.೫೫ ಮತದಾನವಾಗಿದ್ದರೆ, ಹೊಸದುರ್ಗ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಶೇ.೩೫ ರಷ್ಟಾಗಿದೆ.
ಬೆಳಗ್ಗೆ ೭ ಕ್ಕೆ ಆರಂಭವಾದ ಮತದಾನ ಸಂಜೆ ೫ ರವರೆಗೂ ನೀರಸವಾಗಿತ್ತು. ಕೇವಲ ಪಟ್ಟಣ, ನಗರ ಪ್ರದೇಶಗಳಲ್ಲದೆ ಗ್ರಾಮೀಣ ಭಾಗದಲ್ಲೂ ಮತದಾರರು ಮತಗಟ್ಟೆಗೆ ಬರುವ ಉತ್ಸಾಹ ತೋರಲಿಲ್ಲ.
ಹಿರಿಯೂರು ತಾಲೂಕಿನ ಶೇಷಪ್ಪನಹಳ್ಳಿಯಲ್ಲಿ ರಸ್ತೆ, ಆಸ್ಪತ್ರೆ ಸೇರಿದಂತೆ ಮೂಲ ಸೌಕರ್ಯವಿಲ್ಲ ಎಂದು ಮತದಾನ ಬಹಿಷ್ಕರಿಸಿದರು. ಈ ಗ್ರಾಮದಲ್ಲಿ ೭೩೬ ಮತದಾರರಿದ್ದಾರೆ. ಕೃಷಿ, ಕುರಿ ಸಾಕಣೆ ಇಲ್ಲಿನ ಜನರ ಮುಖ್ಯ ಕಸುಬಾಗಿದೆ.
ಹೊಳಲ್ಕೆರೆ ತಾಲೂಕಿನ ಅರಬಗಟ್ಟದ ಗ್ರಾಮಸ್ಥರು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಕೆಲ ಹೊತ್ತು ಮತದಾನ ಬಹಿಷ್ಕರಿಸಿದ್ದರು. ಅಕಾರಿಗಳು ಮತ್ತು ಗ್ರಾಮದ ಮುಖಂಡರು ಮನವೊಲಿಸಿದ ನಂತರ ಮಧ್ಯಾಹ್ನ ೧೨ ಗಂಟೆ ವೇಳೆಗೆ ಮತದಾನದತ್ತ ಮನಸ್ಸು ಮಾಡಿದರು.
ಇದೇ ತಾಲೂಕಿನ ತಿರುಮಲಾಪುರದಲ್ಲಿ ಮತಯಂತ್ರ ದೋಷದಿಂದ ಮತದಾನ ತಡವಾಗಿ ೧೧.೩೦ ಕ್ಕೆ ಆರಂಭವಾಯಿತು. ಅಂಜನಾಪುರದಲ್ಲಿ ದೇವಸ್ಥಾನದ ಹೆಸರಿನಲ್ಲಿ ಹಣ ವಸೂಲಿ ಗದ್ದಲದಿಂದಾಗಿ ೧೧ಗಂಟೆವರೆಗೂ ಮತದಾನ ನಡೆಯಲಿಲ್ಲ.
ಗೊಂದಲ
ಚಿತ್ರದುರ್ಗ ತಾಲೂಕಿನ ಹಳೇ ದ್ಯಾಮವ್ವನಹಳ್ಳಿಯಲ್ಲಿ ಮತದಾರರು ಚುನಾವಣಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಚುನಾವಣಾಕಾರಿ ಬಿಸ್ವಾಸ್ ಭೇಟಿ ನೀಡಿದರು. ಪ್ರಕರಣಕ್ಕೆ ಸಂಬಂಸಿದಂತೆ ಐವರ ವಿರುದ್ಧ ದೂರು ದಾಖಲಿಸಲಾಗಿದೆ.
ಸುಮಾರು ೨೦ ಮತದಾರರ ಗುಂಪು ನಾವು ಜೆಡಿಎಸ್‌ಗೆ ಮತ ಚಲಾಯಿಸುತ್ತೇವೆ ಎಂದು ಮತಗಟ್ಟೆಗೆ ನುಗ್ಗಿದರು. ನೀವು ಯಾವುದಕ್ಕಾದರೂ ಮತ ಹಾಕಿ, ಆದರೆ ಸಾಲಿನಲ್ಲಿ ಬನ್ನಿ ಎಂದಾಗ ಮತದಾರರು ಗಲಾಟೆ ನಡೆಸಿದರು ಎಂದು ಚುನಾವಣಾ ಸಿಬ್ಬಂದಿ ಹೇಳಿದರು. ಅಕಾರಿಗಳು ಬಿಜೆಪಿಗೆ ಮತ ಹಾಕುವಂತೆ ಹೇಳುತ್ತಿದ್ದರು. ಅದನ್ನು ಪ್ರಶ್ನಿಸಿದೆವು ಎಂದು ಮತದಾರರು ಹೇಳುತ್ತಾರೆ.
ಇಲ್ಲಿಗೆ ಭೇಟಿ ನೀಡಿದ ಶಾಸಕ ಎಸ್.ಕೆ.ಬಸವರಾಜನ್, ಜೆಡಿಎಸ್ ಅಭ್ಯರ್ಥಿ ರತ್ನಾಕರ, ಜಿಲ್ಲಾಕಾರಿ ಬಿಸ್ವಾಸ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಪಾವಗಡ ವಿಧಾನಸಭೆ ಕ್ಷೇತ್ರದ ದೊಡ್ಡಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡ್ಡರಹಟ್ಟಿಯಲ್ಲಿ ಮತದಾನ ಕೇಂದ್ರ ಸ್ಥಳಾಂತರ ವಿರೋಸಿ ಗ್ರಾಮಸ್ಥರು ಮಧ್ಯಾಹ್ನ ೧೨ ರವರೆಗೆ ಮತದಾನ ಬಹಿಷ್ಕರಿಸಿದ್ದರು. ಇಲ್ಲಿನ ಮತ ಕೇಂದ್ರವನ್ನು ದೊಡ್ಡಹಟ್ಟಿಗೆ ಸ್ಥಳಾಂತರಿಸಲಾಗಿತ್ತು.
ಮತಪಟ್ಟಿ ಗೊಂದಲ
ಮತಪಟ್ಟಿ ಗೊಂದಲ ಈ ಚುನಾವಣೆಯಲ್ಲೂ ರಿಪೀಟ್ ಆಗಿದೆ. ಗುರುತಿನ ಚೀಟಿ ಇದ್ದರೂ ಮತಪಟ್ಟಿಯಲ್ಲಿ ಹೆಸರಿಲ್ಲದೆ ಕೆಲ ಮತದಾರರು ಪವಿತ್ರ ಕರ್ತವ್ಯದಿಂದ ವಂಚಿತರಾಗಬೇಕಾಯಿತು. ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು ತಾಲೂಕುಗಳು ಇಂಥ ಗೊಂದಲಕ್ಕೆ ಸಾಕ್ಷಿಯಾದವು. ಹಿರಿಯೂರಿನ ನೆಹರು ಮೈದಾನ ಮತಗಟ್ಟೆಯಲ್ಲಿ ಮುಸ್ಲಿಂ ಮಹಿಳೆ ಮೋಹಿಸಿನ್ ತಾಜ್‌ನ ಪೋಟೋ ಇದೆ. ಆದರೆ ಹೆಸರು ಗೌರಮ್ಮ ಎಂದಾಗಿತ್ತು. ಇಂತಹ ದೋಷಗಳಿಗೆ ಕೊರತೆಯಿರಲಿಲ್ಲ. ಇನ್ನು ಕೆಲವೆಡೆ ಏಜೆಂಟರ ಕೈಯಲ್ಲಿದ್ದ ಪಟ್ಟಿಯಲ್ಲಿ ಮತದಾರರ ಹೆಸರಿದ್ದರೆ, ಸಿಬ್ಬಂದಿ ಬಳಿ ಇದ್ದ ಪಟ್ಟಿಯಲ್ಲಿ ಹೆಸರಿಲ್ಲದೆ ಗೊಂದಲ ಸೃಷ್ಟಿಯಾಯಿತು.
ಹೊಸದುರ್ಗ ತಾಲೂಕಿನ ಮೂಡಲಹಟ್ಟಿಯಲ್ಲಿ ಬಹುತೇಕ ಮತದಾರರ ಬಳಿ ಗುರುತಿನ ಚೀಟಿ ಇಲ್ಲದ ಕಾರಣ ಮತದಾನಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಅಲ್ಲಿಗೆ ಭೇಟಿ ನೀಡಿದ್ದ ಸಚಿವ ಗೂಳಿಹಟ್ಟಿ ಶೇಖರ್ ಕ್ಷೇತ್ರ ಚುನಾವಣಾಕಾರಿಯೊಂದಿಗೆ ಚರ್ಚಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಶೇಕಡವಾರು ಮತದಾನ
ಪಾವಗಡ ಶೇ.೫೫
ಹೊಳಲ್ಕೆರೆ ಶೇ.೫೫
ಮೊಳಕಾಲ್ಮುರು ಶೇ.೫೧
ಶಿರಾ ಶೇ.೫೦
ಚಿತ್ರದುರ್ಗ ಶೇ.೪೮
ಹಿರಿಯೂರು ಶೇ.೪೮
ಚಳ್ಳಕೆರೆ ಶೇ.೪೨.೭೦
ಹೊಸದುರ್ಗ ಶೇ.೩೫

ಚಿತ್ರದುರ್ಗ / ಮತಭಾರತ

Posted by Da.Ko.Halli Chandrashekara


ಚಿತ್ರದುರ್ಗ / ಮತಭಾರತ

Posted by Da.Ko.Halli Chandrashekara


Tuesday, April 14, 2009

ಸಪ್ತಪದಿ ತುಳಿದ ಭಾವಿ ಸಂಸದರು

Posted by Da.Ko.Halli Chandrashekara